Friday, March 14, 2025
Google search engine
HomeNewsNurse ಹತ್ಯೆಗೈದು ನದಿಗೆ ಎಸೆದವ ಪೊಲೀಸ್ ವಶಕ್ಕೆ.!
spot_img
spot_img
spot_img
spot_img
spot_img

Nurse ಹತ್ಯೆಗೈದು ನದಿಗೆ ಎಸೆದವ ಪೊಲೀಸ್ ವಶಕ್ಕೆ.!

ಹಾವೇರಿ : ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ (Ranebennur of Haveri District) ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾತಿ ಬ್ಯಾಡಗಿ ಮರ್ಡರ್ ಕೇಸ್ ಗೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ನಡೆದಿದೆ.

ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಸಮೀಪ ಮಾ.6 ರಂದು ಸ್ವಾತಿಯ ಮೃತದೇಹ ಪತ್ತೆಯಾಗಿತ್ತು.

ಇದನ್ನು ಓದಿ : ಸುಪ್ರಸಿದ್ದ ಸವದತ್ತಿ ಯಲ್ಲಮ್ಮ ಕ್ಷೇತ್ರಕ್ಕೆ ಹರಿದು ಬಂತು ಕಾಣಿಕೆ ; ರೂ. 3.68 ಕೋಟಿ ಕಾಣಿಕೆ ಸಂಗ್ರಹ.!

ಪೊಲೀಸರು ಇದು ಅಪರಿಚಿತ ಯುವತಿಯ ಶವ (body of an unknown young woman) ಎಂದು ಘೋಷಿಸಿದ್ದು, ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಶವವನ್ನು ಹೂತು ಹಾಕಲಾಗಿತ್ತು ಎಂದು ತಿಳಿದು ಬಂದಿದೆ.

ಎರಡು ಮೂರು ದಿನದ ಬಳಿಕ ಮರಣೋತ್ತರ ಪರೀಕ್ಷೆಯ ರಿಪೋರ್ಟ್ ನಲ್ಲಿ ಸ್ವಾತಿಯನ್ನು ಕೊಲೆ ಮಾಡಿರುವುದು ಬಯಲಾಗಿದೆ (In the postmortem report, it is revealed that Swati was murdered).

ಇದನ್ನು ಓದಿ : KSRTC ಬಸ್ ಮತ್ತು ಬೈಕ್‌ಗಳು ಮಧ್ಯೆ ಅಪಘಾತ : ಐವರು ಸಾವು.!

ಬಳಿಕ ಸುತ್ತಮುತ್ತ ಪೊಲೀಸ್ ಠಾಣೆಯಲ್ಲಿ ಮಹಿಳೆ ಮಿಸ್ಸಿಂಗ್ ಕೇಸ್ ಏನಾದ್ರೂ ದಾಖಲಾಗಿದೆಯೇ ಎಂದು ಪರಿಶೀಲಿಸಿದ್ದಾರೆ. ಆದರೆ ಸ್ವಾತಿ ಪೋಷಕರು ಮಾರ್ಚ್ 3 ರಂದು ಹಿರೇಕೇರೂರು ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ತನಿಖೆ ನಡೆಸಿದ ಹಿರೇಕೇರೂರು ಠಾಣೆಯ ಪೊಲೀಸರು ಆರೋಪಿ ನಯಾಜ್‌ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!