Wednesday, March 12, 2025
Google search engine
HomeNewsKSRTC ಬಸ್ ಮತ್ತು ಬೈಕ್‌ಗಳು ಮಧ್ಯೆ ಅಪಘಾತ : ಐವರು ಸಾವು.!
spot_img
spot_img
spot_img
spot_img
spot_img

KSRTC ಬಸ್ ಮತ್ತು ಬೈಕ್‌ಗಳು ಮಧ್ಯೆ ಅಪಘಾತ : ಐವರು ಸಾವು.!

ರಾಯಚೂರು : ಮಂಗಳವಾರ ತುಂಬಳಮಂ ಬಳಿ ಸಾರಿಗೆ ಬಸ್ ಮತ್ತು ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ‌

ಮಂಗಳವಾರ (ಮಾ.11) ಗಂಗಾವತಿಯಿಂದ ಆಂಧ್ರದ ಕರ್ನೂಲ್ ಜಿಲ್ಲೆಯ ಆದೋನಿಗೆ ತೆರಳುವಾಗ ಎದುರಿಗೆ ಅದೋನಿಯಿಂದ ಬಂದ ಎರಡು ಬೈಕ್‌ಗಳು ಪೆದ್ದ ತುಂಬಳಮಂ ಬಳಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ.

ಇದನ್ನು ಓದಿ : 17 ವರ್ಷದ PU ವಿದ್ಯಾರ್ಥಿ ಜೊತೆ 36 ವರ್ಷದ ವಿವಾಹಿತೆ ಪರಾರಿ.!

ಈ ಅಪಘಾತದಲ್ಲಿ ಎರಡು ಬೈಕ್​ನಲ್ಲಿದ್ದ ಒಟ್ಟು 5 ಜನ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ ಎಂದು ವರದಿಯಾಗಿದೆ.

ಬಸ್​ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಅಪಘಾತದಲ್ಲಿ ರಾಯಚೂರು ಮೂಲದ ಇಬ್ಬರು ಹಾಗು ಕರ್ನುಲ್ ಜಿಲ್ಲೆಯ ಆದೋನಿ ಮೂಲದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ, ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ.

ಇದನ್ನು ಓದಿ : ಆಜಾನ್ ಕೂಗಲು ಜೋರಾದ ಧ್ವನಿವರ್ಧಕ ಬಳಿಕೆ : ಇಮಾಮ್ ವಿರುದ್ಧ FIR ದಾಖಲು.!

ಅಪಘಾತದ ಕುರಿತು ಆಂಧ್ರಪ್ರದೇಶದ ಆದೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
Most Popular

Recent Comments

- Advertisment -
Google search engine
error: Content is protected !!